Skip to main content

Posts

Showing posts from November, 2010

ಸರ್ವಜ್ಞನ ವಚನಗಳು - 101 ರಿಂದ 110

೧೦೧. ಎಲುವಿನ ಕಾಯಕ್ಕೆ | ಸಲೆ ಚರ್ಮವನು ಹೊದಿಸಿ ಮಲ-ಮೂತ್ರ-ಕ್ರಿಮಿಯು ಒಳಗಿರ್ಪ - ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ ೧೦೨. ಹೊಲಸು ಮಾಂಸದ ಹುತ್ತು | ಎಲುವಿನ ಹಂಜರವು ಹೊಲೆ ಬಲಿದ ತನುವಿನೊಳಗಿರ್ದು - ಮತ್ತದರ ಕುಲವನೆಣಿಸುವರೆ ಸರ್ವಜ್ಞ ೧೦೩. ದಿಟವೆ ಪುಣ್ಯದ ಪುಂಜ | ಸಟೆಯೆ ಪಾಪದ ಬೀಜ ಕುಟಿಲ ವಂಚನೆಯ ಪೊಗದಿರು - ನಿಜವ ಪಿಡಿ ಘಟವ ನೆಚ್ಚದಿರು ಸರ್ವಜ್ಞ ೧೦೪. ಸುರತರು ಮರನಲ್ಲ | ಸುರಭಿಯೊಂದಾವಲ್ಲ ಪರುಷ ಪಾಷಾಣದೊಳಗಲ್ಲ - ಗುರುವು ತಾ ನರರೊಳಗಲ್ಲ ಸರ್ವಜ್ಞ ೧೦೫. ಜ್ಯೋತಿಯಿಂದವೆ ನೇತ್ರ | ರಾತ್ರಿಯಲಿ ಕಾಂಬಂತೆ ಸೂತ್ರದಲಿ ಧಾತನರಿವಂತೆ - ಶಿವನ ಗುರು ನಾಥನಿಂದರಿಗು ಸರ್ವಜ್ಞ ೧೦೬. ಮಂಡೆ ಬೋಳಾದೊಡಂ | ದಂಡು ಕೋಲ್ವಿಡಿದೊಡಂ ಹೆಂಡತಿಯ ಬಿಟ್ಟು ನಡೆದೊಡಂ - ಗುರುಮುಖವ ಕಂಡಲ್ಲದಿಲ್ಲ ಸರ್ವಜ್ಞ ೧೦೭. ಬ್ರಹ್ಮವೆಂಬುದು ತಾನು | ಒಮ್ಮಾರು ನೀಳವೇ ಒಮ್ಮೆ ಸದ್ಗುರುವಿನುಪದೇಶ - ವಾಲಿಸಲು ಗಮ್ಮನೆ ಮುಕ್ತಿ ಸರ್ವಜ್ಞ ೧೦೮. ಊರಿಂಗೆ ದಾರಿಯ | ನಾರು ತೋರಿದರೇನು ಸಾರಾಯಮಪ್ಪ ಮತವನರುಹಿಸುವ ಗುರು ಆರಾದೊಡೇನು ಸರ್ವಜ್ಞ ೧೦೯. ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ ನಿಃಪತ್ತಿಯಾದ ಗುರುವಿನುಪದೇಶದಿಂ ತಪ್ಪದೇ ಮುಕ್ತಿ ಸರ್ವಜ್ಞ ೧೧೦. ಪರುಷ ಲೋಹವ ಮುಟ್ಟಿ | ವರುಷವಿರಬಲ್ಲುದೇ ಪರುಷವೆಂತಂತೆ ಶಿಷ್ಯಂಗೆ

ಸರ್ವಜ್ಞನ ವಚನಗಳು - 91 ರಿಂದ 100

ಸರ್ವಜ್ಞನ ವಚನಗಳು -  91 ರಿಂದ 100 ೯೧. ಹುಟ್ಟಿಸುವನಜನೆಂಬ, ಕಷ್ಟದಾ ನುಡಿಬೇಡ ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದು ಹುಟ್ಟಿಸನದೇಕೆ ಸರ್ವಜ್ಞ ೯೨. ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು ಮತ್ತೆ ಪಾಂಡವರಿಗಾಳಾದ ಹರಿಯು ತಾ ನೆತ್ತಣಾ ದೈವ ಸರ್ವಜ್ಞ ೯೩. ನರಸಿಂಹನವತಾರ ಹಿರಿದಾದ ಅದ್ಭುತವು ಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ ೯೪. ಪಾಲಿಸುವ ಹರಿಯು ತಾ, ಸೋಲನೆಂದೆನಬೇಡ ಶೂಲಿ ತ ಮಗನ ತಲೆ ಚಿಗುಟಿ ಹರಿ ಏಕೆ ಪಾಲಿಸದೆ ಹೋದ ಸರ್ವಜ್ಞ ೯೫. ಹರನವನ ಕೊಲುವಂದು, ಎರಳೆಯನು ಎಸೆವಂದು ಮರಳಿ ವರಗಳನು ಕೊಡುವಂದು ಪುರಹರಗೆ ಸರಿಯಾದ ಕಾಣೆ ಸರ್ವಜ್ಞ ೯೬. ಹರಿ ಬೊಮ್ಮನೆಂಬವರು, ಹರನಿಂದಲಾದವರು ಅರಸಿಗೆ ಆಳು ಸರಿಯಹನೆ ಶಿವನಿಂದ ಮೆರೆವರಿನ್ನಾರು ಸರ್ವಜ್ಞ ೯೭. ಹರಿದಲೆಯ ಬೊಮ್ಮಂಗೆ, ಕುರಿದಲೆಯ ದಕ್ಷಂಗೆ ನೆರೆಹತ್ತು ಜನನವಾಹರಿಗೆ ಇವರುಗಳು ಸರಿಯಹರೆ ಸರ್ವಜ್ಞ ೯೮. ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ ಸರಿಯಾರು ಹೇಳಿ ಸರ್ವಜ್ಞ ೯೯. ಇಂದ್ರನಾನೆಯನೇರಿ ಒಂದನೂ ಕೊಡಲರಿಯ ಚ್ಂದ್ರಶೇಖರನು ಮುದಿಯೆತ್ತನೇರಿ ಬೇಕೆಂದುದನು ಕೊಡುವ ಸರ್ವಜ್ಞ ೧೦೦. ಉಂಬಳಿಯ ಇದ್ದವರ, ಕಂಬಳಿಯ ಹೊದೆಯುವರೆ ಶಂಭುವಿದ್ದಂತೆ ಮತ್ತೊಂದು ದೈವವನು ನಂಬುವನೆ ಹೆಡ್ಡ ಸರ್ವಜ್ಞ

ಸರ್ವಜ್ಞನ ವಚನಗಳು - 81 ರಿಂದ 90

ಸರ್ವಜ್ಞನ ವಚನಗಳು -  81 ರಿಂದ 90 ೮೧. ಎಲ್ಲ ದೈವವ ಬೇಡಿ ಹುಲ್ಲು ಬಾಯ್ತೆರೆಯದೆಲೆ ಬಲ್ಲ ದಾಶಿವನ ಭಜಿಸಿ ಬೇಡಿದಾತ ಇಲ್ಲೆನಲಿಕರಿಯ ಸರ್ವಜ್ಞ ೮೨. ಆದಿ ದೈವವನು ತಾ ಭೇದಿಸಲಿ ಕರಿಯದಲೆ ಹಾದಿಯಾಕಲ್ಲಿಗೆಡೆಮಾಡಿ ನಮಿಸುವಾ ಮಾದಿಗರ ನೋಡು ಸರ್ವಜ್ಞ ೮೩. ತನ್ನಲಿಹ ಲಿಂಗವನು ಮನ್ನಿ ಸಲಿಕರಿಯದಲೆ ಬಿನ್ನಣದಿ ಕಟಿದ ಪ್ರತಿಮೆಗಳಿಗೆರಗುವಾ ಅನ್ಯಾಯ ನೋಡು ಸರ್ವಜ್ಞ ೮೪. ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ ಉಣದಿಪ್ಪ ಲಿಂಗಕುಣಬಡಿಸಿ ಕೈಮುಗಿವ ಬಣಗುಗಳ ನೋಡ ಸರ್ವಜ್ಞ ೮೫. ಕಲ್ಲು ಕಲ್ಲೆಂಬುವಿರಿ ಕಲ್ಲೊಳಗಿರ್ಪುದೇ ದೈವ ಕಲ್ಲಲ್ಲಿ ಕಳೆಯನಿಲಿಸಿದಾ ಗುರುವಿನಾ ಸೊಲ್ಲೇದೈವ ಸರ್ವಜ್ಞ ೮೬. ಗುಡಿಯ ಬೋದಿಗೆ ಕಲ್ಲು ನಡುರಂಗ ತಾ ಕಲ್ಲು ಕಡೆಮೂಲೆ ಸೆರಗು ತಾ ಕಲ್ಲು ವರವನ್ನು ಕೊಡುವಾತ ಬೇರೆ ಸರ್ವಜ್ಞ ೮೭. ಪ್ರಾಣನೂ ಪರಮಮನು ಕಾಣದಲೆ ಒಳಗಿರಲು ಮಾಣದೇ ಸಿಲೆಯ ಹಿಡಿದದಕೆ ಮೂರ್ಖ ತಾ ಪ್ರಾಣಾತ್ಮನೆಂಬ ಸರ್ವಜ್ಞ ೮೮. ಕಲ್ಲು ಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ ನಿಲ್ಲದಲೆ ಹಣೆಯ ಬಡಿವರ್ಗೆ ಬುಗುಟಿಲ್ಲ ದಿಲ್ಲ ಕಾಣಯ್ಯ ಸರ್ವಜ್ಞ ೮೯. ಉತ್ಪತ್ತಿಗೆ ಬೊಮ್ಮಗಡ ಸ್ಥಿತಿಗೆ ವಿಷ್ಣುಗಡ ಹತವ ಗೈವುದಕ್ಕೆ ರುದ್ರಗಣ, ಇವರುಗಳ ಸ್ಥಿತಿಯನರಿಯೆಂದ ಸರ್ವಜ್ಞ ೯೦. ಬೊಮ್ಮನಿರ್ಮಿಪನೆಂಬ ಮರ್ಮತಿಯ ನೀ ಕೇಳು ಬೊಮ್ಮನಾ ಸತಿಗೆ ಮೂಗಿಲ್ಲವಾಮೂಗ ನಿರ್ಮಿಸನದೇಕೆ ಸರ್ವಜ್ಞ

ಸರ್ವಜ್ಞನ ವಚನಗಳು - 71 ರಿಂದ 80

ಸರ್ವಜ್ಞನ ವಚನಗಳು -  71 ರಿಂದ 80 ೭೧. ಲಿಂಗಕ್ಕೆ ತೋರಿಸುತ ನುಂಗುವಾತನೇ ಕೇಳು ಲಿಂಗವುಂಬುವದೆ ? ಇದನರಿದು ಕಪಿಯೆ ನೀ ಜಂಗಮಕೆ ನೀಡು ಸರ್ವಜ್ಞ ೭೨. ಲಿಂಗಪ್ರಸಾದವನು ಅಂಗಕ್ಕೆ ಕೊಂಬುವರು ಗಂಗಾಳದೊಳಗೆ ಕೈ ತೊಳೆದು ಚಲ್ಲುವಾ ಮಂಗಗಳ ನೋಡು ಸರ್ವಜ್ಞ ೭೩. ಹಲವನೋದಿದಡೇನು? ಚೆಲುವನಾದದಡೇನು ? ಕುಲವೀರನೆನೆಸಿ ಫಲವೇನು? ಲಿಂಗದಾ ಒಲುಮೆ ಇಲ್ಲದಲೆ ಸರ್ವಜ್ಞ ೭೪. ಓದುವಾದಗಳೇಕೆ ? ಗಾದೆಯ ಮಾತೇಕೆ? ವೇದ ಪುರಾಣವು ನಿನಗೇಕೆ ಲಿಂಗದಾ ಹಾದಿಯರಿಯದಲೆ ಸರ್ವಜ್ಞ ೭೫. ಕಂಡವರ ಕಂಡು ತಾ ಕೊಂಡ ಲಿಂಗವ ಕಟ್ಟಿ ಕೊಂಡಾಡಲರಿಯದಧಮಂಗೆ ಲಿಂಗವದು ಕೆಂಡದಂತಿಹುದು ಸರ್ವಜ್ಞ ೭೬. ಕಟ್ಟಲೂ ಬಿಡಲು ಶಿವ ಬಟ್ಟಲವ ಕದ್ದನೇ ಕಟ್ಟಲೂ ಬೇಡ ಬಿಡಲೂ ಬೇಡ ಕಣ್ಣು ಮನ ನಟ್ಟರೆ ಸಾಕು ಸರ್ವಜ್ಞ ೭೭. ಆ ದೇವ ಈ ದೇವ ಮಹಾದೇವನೆನಬೇಡ ಆ ದೇವರ ದೇವ ಭುವನದಾ ಪ್ರಾಣಿಗಳಿ ಗಾದವನೇ ದೇವ ಸರ್ವಜ್ಞ ೭೮. ಚಿತ್ರವನು ನವಿಲೊಳು ವಿ ಚಿತ್ರವನು ಗಗನದೊಳು ಪತ್ರ ಪುಷ್ಪಗಳ ವಿವಿಧವರ್ಣಗಳಿಂದ ಚಿತ್ರಿಸಿದರಾರು ಸರ್ವಜ್ಞ ೭೯. ಇಂಗಿನನೊಳು ನಾತವನು ತೆಂಗಿನೊಳಗೆಳೆ ನೀರು ಭ್ರಂಗ ಕೋಗಿಲೆಯ ಕಂಠದೊಳು ಗಾಯನವ ತುಂಬಿದವರಾರು ಸರ್ವಜ್ಞ ೮೦. ಕಳ್ಳಿಯೊಳು ಹಾಲು, ಮುಳು ಗಳ್ಳಿಯೊಳು ಹೆಜ್ಜೇನು ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ ಸುಳ್ಳೆನ್ನಬಹುದೆ? ಸರ್ವಜ್ಞ

ಸರ್ವಜ್ಞನ ವಚನಗಳು - 61 ರಿಂದ 70

ಸರ್ವಜ್ಞನ ವಚನಗಳು -  61 ರಿಂದ 70 ೬೧. ಒಮ್ಮನದ ಶಿವಪೂಜೆ ಗಮ್ಮನೆ ಮಾಡುವದು ಇಮ್ಮನವ ಪಿಡಿದು ಕೆಡಬೇಡ ವಿಧಿವಶವು ಸರಿಮ್ಮನೇ ಕೆಡಗು ಸರ್ವಜ್ಞ ೬೨. ಅಷ್ಟವಿಧದರ್ಚನೆಯ ನೆಷ್ಟು ಮಾಡಿದರೇನು? ನಿಷ್ಠೆ ನೆಲೆಗೊಳದೆ ಭಜಿಸುವಾ ಪೂಜೆ ತಾ ನಷ್ಟ ಕಾಣಯ್ಯ ಸರ್ವಜ್ಞ ೬೩. ಇಷ್ಟಲಿಂಗದಿ ಮನವ ನೆಟ್ಟನೆಯ ನಿಲಿಸದಲೆ ಕಷ್ಟಭ್ರಮೆಗಳಲಿ ಮುಳುಗಿದನು ಕರ್ಮದಾ ಬಟ್ಟೆಗೆ ಹೋಹ ಸರ್ವಜ್ಞ ೬೪. ಎಷ್ಟು ಬಗೆಯಾರತಿಯ ಮುಟ್ಟಿಸಿದ ಫಲವೇನು? ನಿಷ್ಠೆಯಿಲ್ಲದವನ ಶಿವಪೂಜೆ ಹಾಳೂರ ಕೊಟ್ಟಗುರಿದಂತೆ ಸರ್ವಜ್ಞ ೬೫. ಒಸೆದೆಂಟು ದಿಕ್ಕಿನಲ್ಲಿ ಮಿಸುನಿ ಗಿಣ್ಣಲು ಗಿಂಡಿ ಹಸಿದು ಮಾಡುವನ ಪೂಜೆಯದು ಬೋಗಾರ ಪಸರ ವಿಟ್ಟಂತೆ ಸರ್ವಜ್ಞ ೬೬. ಬತ್ತಿ ಹೆತ್ತುಪ್ಪವನು ಹತ್ತಿಸಿದ ಫಲವೇನು? ನಿತ್ಯ ನೆಲೆಗೊಳದೆ ಭಜಿಸುವಾ ಪೂಜೆ ತಾ ಹತ್ತಿಗೇಡೆಂದ ಸರ್ವಜ್ಞ ೬೭. ಎಣಿಸುತಿರ್ಪುದು ಬಾಯಿ ಪೊಣರುತಿರ್ಪುದು ಬೆರಳು ಕ್ಷಣಕ್ಕೊಮ್ಮೆ ಒಂದನೆಣಿಸುವಾ ಜಪಕೊಂದು ಕುಣಿಕೆಯುಂಟೆಂದ ಸರ್ವಜ್ಞ ೬೮. ಎಣಿಸುತಿರ್ಪುದು ಬೆರಳು ಗುಣಿಸುತಿರ್ಪುದು ಜಿಹ್ವೆ ಮನಹೋಗಿ ಹಲವ ನೆನೆದರದು ಹಾಳೂರ ಶುನಕನಂತಕ್ಕು ಸರ್ವಜ್ಞ ೬೯. ಕೊಲುವ ಕೈಯೊಳು ಪೂಜೆ, ಮೆಲುವ ಬಾಯೊಳು ಮಂತ್ರ ಸಲೆ ಪಾಪವೆರೆದ ಮನದೊಳಗೆ ಪೂಜಿಪನೆ ಹೊಲೆಯ ಕಾಣಯ್ಯ ಸರ್ವಜ್ಞ ೭೦. ಲಿಂಗಪೂಜಿಸುವಾತ ಜಂಗಮಕ್ಕೆ ನೀಡಿದೊಡೆ ಲಿಂಗದಾ ಕ್ಷೇಮ ಘನವಾಗಿ ಆ ಲಿಂಗ ಹಿಂಗದಿರುತಿಹುದು ಸರ್ವಜ್ಞ

ಸರ್ವಜ್ಞನ ವಚನಗಳು - 51 ರಿಂದ 60

ಸರ್ವಜ್ಞನ ವಚನಗಳು -  51 ರಿಂದ 60 ೫೧. ಗಂಗೆಯಾ ತಡೆ ಲೇಸು, ಮಂಗಳನ ಬಲ ಲೇಸು ಜಂಗಮ ಭಕ್ತನಾ ನಡೆ ಲೇಸು, ಶರಣರಾ ಸಂಗವೇ ಲೇಸು ಸರ್ವಜ್ಞ ೫೨. ಆಕಾಶಪಥ ಮೀರಿ, ದೇಕವಸ್ತುವ ತಿಳಿದು ಸಾಕಾರವಳಿದು ನಿಜವಾದ ಐಕ್ಯಂಗೆ ಏಕತ್ರ ನೋಡು ಸರ್ವಜ್ಞ ೫೩. ನಾನು-ನೀನುಗಳದು, ತಾನು ಲಿಂಗದಿ ಉಳಿದು ನಾನಾ ಭ್ರಮೆಗಳ ಅತಿಗಳೆದು ನಿಂದಾತ ತಾನೈಕ್ಯ ನೋಡು ಸರ್ವಜ್ಞ ೫೪. ಹೀನಂಗೆ ಗತಿಯಿಲ್ಲ, ದೀನಗನುಚಿತವಲ್ಲ ಏನು ಇಲ್ಲದವಗೆ ಭಯವಿಲ್ಲ ಐಕ್ಯಂಗೆ ತಾನೆಂಬುದಿಲ್ಲ ಸರ್ವಜ್ಞ ೫೫. ಆಗಿಲ್ಲ ಹೋಗಿಲ್ಲ, ಮೇಗಿಲ್ಲ ಕೆಳಗಿಲ್ಲ ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕ್ಕೆ ದೇಗುಲವೆ ಇಲ್ಲ ಸರ್ವಜ್ಞ ೫೬. ಅಲಸದಾ ಶಿವಪೂಜೆ ಹುಲುಸುಂಟು ಕೇಳಯ್ಯ ಬಲುಕವಲು ಒಡೆದು ಬೇರಿಂದ ತುದಿತನಕ ಹಲಸು ಕಾತಂತೆ ಸರ್ವಜ್ಞ ೫೭. ಉಂಡುಂಡು ತಿರುಗುವಾ ಭಂಡರಾ ಕಳೆ ಬೇಡ ಕಂಡು ಲಿಂಗವನು ಪೂಜಿಸಿದವಗೆ ಯಮ ದಂಡ ಕಾಣಯ್ಯ ಸರ್ವಜ್ಞ ೫೮. ಆತುಮದ ಲಿಂಗವನು ಪ್ರೀತಿಯಲಿ ಪೂಜಿಪಗೆ ಆತಂಕವಿಲ್ಲ ಭಯವಿಲ್ಲ ದಶವಿಧದ ಪಾತಕಗಳಿಲ್ಲ ಸರ್ವಜ್ಞ ೫೯. ಲಿಂಗವನು ಅಂದವನ ಅಂಗ ಹಿಂಗಿರಬೇಕು ತೆಂಗಿನಕಾಯಿ ಪರಿಪೂರ್ಣ ಬಲಿದು ಜಲ ಹಿಂಗಿದಪ್ಪಂದ ಸರ್ವಜ್ಞ ೬೦. ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು ಲಿಂಗದಾ ನೆನಹು ಘನವಾಗೆ ಶಿವಲಿಂಗ ಹಿಂಗಿರದು ಅವನ ಸರ್ವಜ್ಞ

ಸರ್ವಜ್ಞನ ವಚನಗಳು - 41 ರಿಂದ 50

ಸರ್ವಜ್ಞನ ವಚನಗಳು -  41 ರಿಂದ 50 ೪೧. ದೇಹಿಯನಬೇಡ, ನಿರ್ದೇಹಿ ಜಂಗಮಲಿಂಗ ದೇಹ ಗುಣದಾಸೆಯಳಿದೊಡೆ ಆತ ನೀರ್ದೇಹಿ ಕಾಣಯ್ಯ ಸರ್ವಜ್ಞ ೪೨. ವಂಶವನು ಪುಗನೆಂದಿ, ಗಾಶಿಸನು ಪರಧನವ ಸಂಶಯವನಳಿದ ನಿಜಸುಖಿ ಮಹಾತ್ಮನು ಹಿಂಸೆಗೊಡಬಡನು ಸರ್ವಜ್ಞ ೪೩. ಅರ್ಪಿತದ ಭೇದವನು ತಪ್ಪದೆಲೆ ತಿಳಿದಾತ ಸರ್ಪಭುಷಣನ ಸಮನಹನು ನಿಜಸುಖದೋ ಳೊಪ್ಪುತ್ತಲಿಹನು ಸರ್ವಜ್ಞ ೪೪. ಭೋಗಿಸುವ ವಸ್ತುಗಳ ಭೋಗಿಸು ಶಿವಗಿತ್ತು ರಾಗದಿಂ ಸತ್ಯವೆರಸಿಹ ಪ್ರಸಾದಿಯ ಶ್ರಿ ಗುರುವು ಎಂಬೆ ಸರ್ವಜ್ಞ ೪೫. ಲಿಂಗವಿರಹಿತನಾಗಿ ನುಂಗದಿರು ಏನುವನು ತಿಂಗಳಲಿ ಸತ್ತ ಕೊಳೆ ನಾಯಿ ಮಾಂಸವನು ನುಂಗಿದೆಂತಕ್ಕು ಸರ್ವಜ್ಞ ೪೬. ಅಂಜದಲೆ ಕೊಂಡಿಹರೆ, ನಂಜು ಅಮೃತವದಕ್ಕು ಅಂಜಿ, ಅಳುಕುತಲಿ ಕೊಂಡಿಹರೆ ಅಮೃತವು ನಂಜಿನಂತಕ್ಕು ಸರ್ವಜ್ಞ ೪೭. ಸಿರಿಯು ಬಂದರೆ ಲೇಸು, ತೀರದ ಜವ್ವನ ಲೇಸು ಮರಣವಿಲ್ಲದಾ ಮಗಲೇಸು ಲಿಂಗಕ್ಕೆ ಶರಣುವೆ ಲೇಸು ಸರ್ವಜ್ಞ ೪೮. ಸೋಕಿಡಾ ಸುಖಂಗಳ ನೇಕವನು ಶಿವಗಿತ್ತು ತಾ ಕಿಂಕರತೆಯ ಕೈಕೊಂಡ ಮನುಜನೇ ಲೋಕಕ್ಕೆ ಶರಣ ಸರ್ವಜ್ಞ ೪೯. ಮಲಯಜದ ಮರದೊಳಗೆ ಸಲೆ ಗಂಧವಿಪ್ಪಂತೆ ಸುಲಲಿತವು ಆದ ಶರಣರಾಹೃದಯದಲಿ ನೆಲಸಿಹನು ಶಿವನು ಸರ್ವಜ್ಞ ೫೦. ಕಿಚ್ಚಿನೊಳು ಸುಘೃತವು, ಒಚ್ಚತದಿ ಕರ್ಪುರವು ಅಚ್ಚಳಿದು ನಿಜದಿ ನಿಂದಂತೆ, ಭೇದವನು ಮುಚ್ಚುವನೆ ಶರಣ ಸರ್ವಜ್ಞ

ಸರ್ವಜ್ಞನ ವಚನಗಳು - 31 ರಿಂದ 40

ಸರ್ವಜ್ಞನ ವಚನಗಳು -  31 ರಿಂದ 40 ೩೧. ಕಾಯ ಕಮಲದ ಸಜ್ಜೆ, ಜೀವರತನುವೆ ಲಿಂಗ ಭವ ಪುಶ್ಪದಿಂ ಶಿವಪೂಜೆ ಮಾಡುವರ ದೇವರೆಂದೆಂಬೆ ಸರ್ವಜ್ಞ ೩೨. ಓದು ವಾದಗಳೇಕೆ, ಗಾದಿಯ ಮಾತೇಕೆ ವೇದ ಪುರಾಣ ನಿನಗೇಕೆ? ಲಿಂಗದಾ ಹಾದಿಯರಿದವಗೆ ಸರ್ವಜ್ಞ ೩೩. ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ? ಅರ್ಪಿತನ ಗೊಡವೆ ತನಗೇಕೆ? ಲಿಂಗದ ನೆಪ್ಪನರಿದವಗೆ ಸರ್ವಜ್ಞ ೩೪. ಗಂಗೆ ಗೋದಾವರಿಯು, ತುಂಗಭದ್ರೆಯು ಮತ್ತೆ ಹಿಂಗದೆ ಮುಳುಗಿ ಫಲವೇನು? ನಿನ್ನಲ್ಲೆ ಲಿಂಗದರುವಿಲ್ಲ ಸರ್ವಜ್ಞ ೩೫. ಮೆಟ್ಟಿದಾ ಕಲ್ಲಿಂಗೆ, ಮೊಟ್ಟೆ ಪತ್ರಿಯ ಹಾಕಿ ಕಟ್ಟಿದಾ ಲಿಂಗ ಅಡಿಮಾಡಿ ಶರಣೆಂಬ ಭ್ರಷ್ಟನ ಕಂಡ್ಯಾ ? ಸರ್ವಜ್ಞ ೩೬. ಗುರುವಿಂದ ಬಂಧುಗಳು, ಗುರುವಿಂದ ದೈವಗಳು ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ ಗುರುವಿಂದ ಮುಕ್ತಿ ಸರ್ವಜ್ಞ ೩೭. ಶಿವಪೂಜೆ ಮಾಡಿದಡೆ, ಶಿವನ ಕೊಂಡಾಡಿದಡೆ ಶಿವನಲ್ಲಿ ನೆನೆಹ ನಿಲಿಸಿದಡೆ ಶಿವಲೋಕ ವವಗೆ ಕಾಣಯ್ಯ ಸರ್ವಜ್ಞ ೩೮. ನಿಷ್ಠೆ ಇದ್ದಡೆ ಶಿವನು, ಗಟ್ಟಿಗೊಂಡೊಳಗಿರ್ಪ ನಿಷ್ಠೆಯಿಲ್ಲದಲೆ ಭಜಿಸಿದೊಡೆ ಶಿವನವನ ಬಿಟ್ಟು ಬಯಲಪ್ಪ ಸರ್ವಜ್ಞ ೩೯. ಇಟ್ಟಾವಿಭೂತಿ ತಾ ಪಟ್ಟಗಟ್ಟಿರುತಿಕ್ಕು ಇಟ್ಟಾವಿಭೂತಿಯರಿಯದಿರೆ ಸೀಳಿದಾ ಬಟ್ಟೆಯಂತಕ್ಕು ಸರ್ವಜ್ಞ ೪೦. ಲಿಂಗದಲಿ ಮನವಾಗಿ, ಲಿಂಗದಲಿ ನೆನಹಾಗಿ ಲಿಂಗದಲಿ ನೋಟ, ನುಡಿಕೂಟವಾದವನು ಲಿಂಗವೇ ಅಕ್ಕು ಸರ್ವಜ್ಞ

ಸರ್ವಜ್ಞನ ವಚನಗಳು - 21 ರಿಂದ 30

ಸರ್ವಜ್ಞನ ವಚನಗಳು -  21 ರಿಂದ 30 ೨೧. ಅಂಜದಲೆ ಕೊಂಡಿಹರೆ ನಂಜು ಅಮೃತವದಕ್ಕು ಅಂಜಿ ಅಳುಕುತಲಿ ಕೊಂಡಿಹರೆ, ಅಮೃತವು ನಂಜಿನಂತಕ್ಕು ಸರ್ವಜ್ಞ ೨೨. ಎಂಜಲೂ ಅಶೌಚ ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ ರಂಜನನ ನೆನೆಯೊ ಸರ್ವಜ್ಞ ೨೩. ಭೂತೇಶಗೆರಗುವನು ಜಾತಿ ಮಾದಿಗನಲ್ಲ ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ ದಾತ ಮಾದಿಗನು ಸರ್ವಜ್ಞ ೨೪. ಕುಲಗೆಟ್ಟವರು ಚಿಂತೆ ಯೊಳಗಿಪ್ಪರಂತಲ್ಲ ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ ಕುಲಗೋತ್ರವುಂಟೆ? ಸರ್ವಜ್ಞ ೨೫. ಜಾತಿಹೀನನ ಮನೆಯ ಜ್ಯೊತಿ ತಾ ಹೀನವೆ? ಜಾತಂಗೆ ಜಾತನೆನಲೇಕೆ? ಅರುವಿಡಿ ದಾತನೇ ಜಾತ ಸರ್ವಜ್ಞ ೨೬. ಯಾತರ ಹೂವೇನು ? ನಾತವಿದ್ದರೆ ಸಾಕು ಜಾತಿಯಲಿ ಜಾತಿಯೆನಬೇಡ ಶಿವನೊಲಿ ದಾತನೆ ಜಾತ ಸರ್ವಜ್ಞ ೨೭. ಅಕ್ಕರವು ತರ್ಕಕ್ಕೆ ಲೆಕ್ಕವು ಗಣಿತಕ್ಕೆ ಮಿಕ್ಕವೋದುಗಳು ತಿರುಪೆಗೆ ಮೋಕ್ಷಕಾ ರಕ್ಕರವೇ ಸಾಕು ಸರ್ವಜ್ಞ ೨೮. ಎಲ್ಲರನು ನೆರೆ ಬೇಡಿ, ಹಲ್ಲು ಬಾಯ್ದೆರೆಯುವರೇ? ಬಲ್ಲಿದಾ ಶಿವನ ಭಜಿಸಿದರೆ ಶಿವ ತಾನು ಇಲ್ಲೆನ್ನಲರಿಯನು ಸರ್ವಜ್ಞ ೨೯. ಇಂದ್ರನಾನೆಯನೇರಿ ಒಂದನೂ ಕೊಡಲರಿಯ ಚಂದ್ರಶೇಖರನು ಮುದಿ ಎತ್ತನೇರಿ ಬೇ ಕೆಂದುದನು ಕೊಡುವ ಸರ್ವಜ್ಞ ೩೦. ಸಾರವನು ಬಯಸುವರೆ, ಕ್ಷಾರವನು ಬೆರಿಸುವುದು ಮಾರಸಂಹರನ ನೆನೆದರೆ ಮೃತ್ಯುವು ದೂರಕ್ಕೆ ದೂರ ಸರ್ವಜ್ಞ

ಸರ್ವಜ್ಞನ ವಚನಗಳು - 11 ರಿಂದ 20

೧೧. ಹರನಿಚ್ಛೆಯಿಲ್ಲದಲೆ ಹರಿದು ಹೋಗದು ಪಾಪ ಹರಭಕ್ತಿಯುಳ್ಳ ಗುರುವರನು ಓರ್ವನೇ ನರ  ದೈವವೆಂಬೆ ಸರ್ವಜ್ಞ ೧೨. ಬಂಧುಗಳು ಆದವರು ಬಂದುಂಡು ಹೋಗುವರು ಬಂಧನವ ಕಳೆಯಲರಿಯರಾ  ಗುರುವಿಗಿಂತ ಬಂಧುಗಳುಂಟೆ ಸರ್ವಜ್ಞ ೧೩. ಜೀವ, ಸದ್ಗುರುನಾಥ, ಕಾಯ ಪುಸಿಯನೆ ತೋರಿ ಮಾಯನಾಶವನು ಹರಿಸುತ್ತ  ಶಿಷ್ಯಂಗೆ ತಾಯಿಯಂತಾದ ಸರ್ವಜ್ಞ ೧೪. ತಂದೆಗೂ ಗುರುವಿಗೂ ಒಂದು ಅಂತರವುಂಟು ತಂದೆ ತೋರುವನು ಸದ್ಗುರುವ.  ಗುರುರಾಯ ಬಂಧನವ ಕಳೆವ ಸರ್ವಜ್ಞ ೧೫. ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು ಗುರುತೋರ್ವ ದೈವದೆಡೆಯನು  ದೈವತಾ ಗುರುವ ತೋರುವನೇ? ಸರ್ವಜ್ಞ ೧೬. ಗುರುಪಾದಕೆರಗಿದರೆ, ಶಿರಸು ತಾ ಮಣಿಯಕ್ಕು ಪರಿಣಾಮವಕ್ಕು ಪದವಕ್ಕು  ಕೈಲಾಸ ನೆರಮನೆಯಕ್ಕು ಸರ್ವಜ್ಞ ೧೭. ಒಂದರೊಳಗೆಲ್ಲವು ಸಂದಿಸುವದನು ಗುರು ಚಂದದಿಂ ತೋರಿಕೊಡದಿರಲು  ಶೊಷ್ಯನವ ಕೊಂದನೆಂದರಿಗು ಸರ್ವಜ್ಞ ೧೮. ಲಿಂಗಕ್ಕೆ ಕಡೆ ಎಲ್ಲಿ, ಲಿಂಗದೆಡೆ ಎಲ್ಲಿ ಲಿಂಗದೊಳು ಜಗವು ಅಡಗಿಹುದು  ಲಿಂಗವನು ಹಿಂಗಿದವರುಂಟೆ? ಸರ್ವಜ್ಞ ೧೯. ದೆಶಕ್ಕೆ ಸಜ್ಜನನು, ಹಾಸ್ಯಕ್ಕೆ ಹನುಮಂತ ಕೇಶವನು ಭಕ್ತರೊಳಗೆಲ್ಲ ಮೂರು  ಕ ಣ್ಣೇಶನೆ ದೈವ ಸರ್ವಜ್ಞ ೨೦. ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ? ಶಂಭುವಿರಲಿಕ್ಕೆ ಮತ್ತೊಂದು  ದೈವವ ನಂಬುವನೇ ಹೆಡ್ಡ ಸರ್ವಜ್ಞ

ಅಲ್ಲಮಪ್ರಭುವಿನ ವಚನಗಳು : 111 ರಿಂದ 120

೧೧೧. ಅಱಿದಱಿದು ಅಱಿವು ಬಱುದೊಱಿವೋಯಿತ್ತು ! "ಕುಱುಹ[ತೋಱ]ದಡೆಂತೂ ನಂಬರು, ತೆಱಹಿಲ್ಲದ ಘನವ ನೆನೆದು ಗುರುಶರಣೆಂಬುದಲ್ಲದೆ ಮಱಹು ಬಂದೀತೆಂ"ದು ಗುರು ಕುಱುಹ ತೋಱಿದನಲ್ಲದೆ ಬಲ್ಲಡೆ ಗುಹೇಶ್ವರಲಿಂಗವು ಹೃದಯದಲೈದಾನೆ. ೧೧೨. ಉದಕ ಮೂರುತಿಯಾಗಿ ಉದಯವಾಯಿತ್ತು ಪಿಂಡಿಗೆಯಲ್ಲಿ ಮೂಲ ಸ್ಥಾನ ಸ್ಥಾಪ್ಯವಾಯಿತ್ತು ಸ್ವದೇಹಶಿವಪುರದಲ್ಲಿ ! ವಾಯು ಪೂಜಾರಿಯಾಗಿ ಪರಿಮಳದಿಂಡೆದಂಡೆಯ ಕಟ್ಟಿ ಪೂಜಿಸುತ್ತಿರ್ದುದೋ ನವದ್ವಾರಶಿವಾಲಯದಾದಿಮಧ್ಯಸ್ಥಾನದಲ್ಲಿ ಗುಹೇಶ್ವರನೆಂಬುದಲ್ಲಿಯೆ ನಿಂದಿತ್ತು. ೧೧೩. ಕಾಲೇ ಕಂಭಗಳಾದವೆನ್ನ ದೇಹವೇ ದೇಗುಲವಾದುವಯ್ಯ ! ಎನ್ನ ನಾಲಗೆಯೆ ಘಂಟೆ ಶಿರ ಸುವರ್ಣದ ಕಳಸವಿದೇನಯ್ಯ ! ಸ್ವರವೇ ಲಿಂಗಕ್ಕೆ ಸಿಂಹಾಸನವಾಗಿರ್ದುದು ! ಗುಹೇಶ್ವರ, ನಿಮ್ಮ ಪ್ರಾಣಲಿಂಗಪ್ರತಿಷ್ಠೆ ಪಲ್ಲಟವಾಗದಂತಿದ್ದೆನಯ್ಯ. ೧೧೪. ಪ್ರಾಣಲಿಂಗಕ್ಕೆ ಕಾಯವೇ ಸೆಜ್ಜೆ ಆಕಾಶಗಂಗೆಯಲ್ಲಿ ಮಜ್ಜನ ಹೂವಿಲ್ಲದ ಪರಿಮಳದ ಪೂಜೆ ಹೃದಯಕಮಲದಲ್ಲಿ ಶಿವಶಿವಾ ಎಂಬ ಶಬ್ದ ಇದು ಅದ್ವೈತ ಕಾಣಾ ಗುಹೇಶ್ವರ. ೧೧೫. ಹೊತ್ತಾರೆ ಪೂಜಿಸಲುಬೇಡ ಕಂಡಾ ! ಬೈಗೆ ಪೂಜಿಸಲುಬೇಡ ಕಂಡಾ ! ಇರುಳುವನೂ ಹಗಲುವನೂ ಕಳೆದು ಪೂಜಿಸಬೇಕು ಕಂಡಾ ! ಇಂತಪ್ಪ ಪೂಜೆಯ ಪೂಜಿಸುವರ ಎನಗೆ ತೋಱಯ್ಯ ಗುಹೇಶ್ವರ. ೧೧೬. ಅಂಗದಲ್ಲಿ ಮಾಡುವ ಸುಖವದು ಲಿಂಗಕ್ಕೆ ಭೂಷಣವಾಯಿತ್ತು. ಕಾಡುಗಿಚ್ಚಿನ ಕೈಯಲ್ಲಿ ಕರಡವ ಕೊಯ್ಸುವಂತೆ- ಹಿಂದೆ ಮೆದೆಯಿಲ್ಲ ! ಮು

ಅಲ್ಲಮಪ್ರಭುವಿನ ವಚನಗಳು : 101 ರಿಂದ 110

೧೦೧. ಪ್ರಣವಮಂತ್ರವ ಕರ್ಣದಲಿ ಹೇಳಿ ಶ್ರೀಗುರು ಶಿಷ್ಯನ ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡಿದ ಬಳಿಕ ಪ್ರಾಣದಲಿ ಲಿಂಗವಿಪ್ಪುದೆಂಬ ವ್ರತಗೇಡಿಗಳ ಮಾತ ಕೇಳಲಾಗದು. ಒಳಗಿಪ್ಪನೇ ಲಿಂಗದೇವನು ಮಲ-ಮೂತ್ರ-ಮಾಂಸದ ಹೇಸಿಕೆಯೊಳಗೆ ? ಅಲ್ಲಿ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೇ ? ಆ ಪ್ರಾಣವ ತಂದು ತನ್ನ ಇಷ್ಟಲಿಂಗದಲ್ಲಿರಿಸಿ ನೆರೆಯ ಬಲ್ಲಡೆ ಆತನೆ ಪ್ರಾಣಲಿಂಗಸಂಬಂಧಿ ! ಅಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ? ೧೦೨. ಕದಳಿಯ ಬನವ ಹೊಕ್ಕು ಹೊಲಬ ತಿಳಿಯದನ್ನಕ್ಕ, ಬಯಲ ಗಾಳಿಯ ಹಿಡಿದು ಘಟ್ಟಿ ಮಾಡದನ್ನಕ್ಕ, ಬಱಿದೆ ಬಹುದೇ ಶಿವಜ್ಞಾನ ? ಷಡುವರ್ಗವಳಿಯದನ್ನಕ್ಕ ಅಷ್ಟಮದವಳಿಯದನ್ನಕ್ಕ ಬಱಿದೆ ಬಹುದೇ ಶಿವಸಂಪದ ? ಮದಮತ್ಸರವ ಮಾಡಲಿಲ್ಲ ! ಹೊದಕುಳಿಗೊಳಲಿಲ್ಲ ಗುಹೇಶ್ವರಲಿಂಗ ಕಲ್ಪಿತದೊಳಗಲ್ಲ ! ೧೦೩. ಶಬ್ದ ಸ್ಪರ್ಶ ರೂಪ ರಸ ಗಂಧ ಪಂಚೇಂದ್ರಿಯ ಸಪ್ತಧಾತು ಅಷ್ಟಮದದಿಂದ ಮುಂದುಗಾಣದವರು ನೀವು ಕೇಳಿರೇ ! ಲಿಂಗವಾರ್ತೆಯ ವಚನರಚನೆಯ ಮಾತನಾಡುವಿರಯ್ಯ ! ಸಂಸಾರದ ಮುಚ್ಚು ಬಿಡದನ್ನಕ್ಕರ ಸೂಕ್ಷ್ಮಶಿವಪಥವು ಸಾಧ್ಯವಾಗದು. ಗುಹೇಶ್ವರಲಿಂಗದಲಿ ವಾಕು ಪಾಕವಾದಡೇನು ? ಮನ ಪಾಕವಾಗದನ್ನಕ್ಕರ ?! ೧೦೪. ಮರ್ತ್ಯಲೋಕದ ಮಾನವರು ದೇಗುಲದೊಳಗೊಂದು ದೇವರ ಮಾಡಿದಡೆ ಆನು ಬೆಱಗಾದೆನಯ್ಯ ! ನಿಚ್ಚಕ್ಕೆ ನಿಚ್ಚ ಅರ್ಚನೆಪೂಜನೆಯ ಮಾಡಿಸಿ ಭೋಗವ ಮಾಡುವರ ಕಂಡು ನಾನು ಬೆಱಗಾದೆನು ಗುಹೇಶ್ವರ, ನಿಮ್ಮ ಶರಣರು ಹಿಂದೆ ಲಿಂಗ

ಅಲ್ಲಮಪ್ರಭುವಿನ ವಚನಗಳು : 91 ರಿಂದ 100

ಅಲ್ಲಮಪ್ರಭುವಿನ ವಚನಗಳು : 91 ರಿಂದ 100 ೯೧. ಲಿಂಗ ಒಳಗೋ ಹೊಱಗೋ ? ಬಲ್ಲಡೆ ನೀವು ಹೇಳಿರೇ ! ಲಿಂಗ ಎಡನೋ ಬಲನೋ ? ಬಲ್ಲಡೆ ನೀವು ಹೇಳಿರೇ ! ಲಿಂಗ ಮುಂದೋ ಹಿಂದೋ ? ಬಲ್ಲಡೆ ನೀವು ಹೇಳಿರೇ ! ಲಿಂಗ ಸ್ಥೂಲವೋ ಸೂಕ್ಷ್ಮವೋ ? ಬಲ್ಲಡೆ ನೀವು ಹೇಳಿರೇ ! ಲಿಂಗ ಪ್ರಾಣವೋ, ಪ್ರಾಣ ಲಿಂಗವೋ ? ಬಲ್ಲಡೆ ನೀವು ಹೇಳಿರೇ ? ಗುಹೇಶ್ವರ. ೯೨. ತನುವಿಂಗೆ ತನುವಾಗಿ ಮನಕ್ಕೆ ಮನವಾಗಿ ಜೀವಕ್ಕೆ ಜೀವವಾಗಿ ಇದ್ದುದನಾರು ಬಲ್ಲರೋ ?! ಅದು ದೂರವೆಂದು ಸಮೀಪವೆಂದು ಮಹಂತ ಗುಹೇಶ್ವರನೊಳಗೆಂದು ಹೊಱಗೆಂದು ಬಱುಸೂಱೆವೋದರು ! ಪ್ರಸಾದಿ ಸ್ಥಲ ೯೩. ಲಿಂಗಾರ್ಚನೆಯಿಲ್ಲದ ಮುನ್ನ ಸಿಂಗಿಯಾನಾರೋಗಿಸಿದಿರಿ ಸಂಜೆ ಸಮಾಧಿಗಳಿಲ್ಲದ ಮುನ್ನ ಉಂಡಿರಿ ಚೆನ್ನನ ಮನೆಯಲ್ಲಿ ಚಿತ್ರಗುಪ್ತರಱಿಯದ ಮುನ್ನ ಎತ್ತಿದಿರಿ ಕಾಂಚಿಯ ಪುರವ ಬೈಚಿಟ್ಟಿರಿ ಕೈಲಾಸವ ನಿಮ್ಮ ಚಿಕ್ಕುಟಾಧಾರದಲ್ಲಿ ಈರೇಳು ಭುವನಂಗಳೆಲ್ಲವೂ ನಿಮ್ಮ ರೋಮಕೂಪದಲ್ಲಡಗಿದವು ಪ್ರಾಣಾಪಾನ ವ್ಯಾನೋದಾನ ಸಮಾನರಹಿತ ಗುಹೇಶ್ವರ. ೯೪. ತ್ರಿವಿಧ ನಿತ್ಯವ ತ್ರಿವಿಧ ಅನಿತ್ಯವ ಬಲ್ಲವರಾರೋ ? ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧಪ್ರಸಾದದ ಕೊಳಬಲ್ಲಡೆ ಆತನ ಧೀರನೆಂಬೆ ! ಆತನ ಗುಹೇಶ್ವರಲಿಂಗದಲ್ಲಿ ಅಚ್ಚಪ್ರಸಾದಿಯೆಂಬೆ ! ೯೫. ಬೇಡದ ಮುನ್ನ ಮಾಡಬಲ್ಲಡೆ ಭಕ್ತ ಬೇಡುವನೆ ಲಿಂಗಜಂಗಮ ? ಬೇಡುವರಿಗೆಯೂ ಬೇಡಿಸಿಕೊಂಬವರಿಗೆಯೂ ಪ್ರಸಾದವಿಲ್ಲ ಗುಹೇಶ್ವರ. ೯೬. ಒಳಗ ತೊಳ

ಅಲ್ಲಮಪ್ರಭುವಿನ ವಚನಗಳು : 81 ರಿಂದ 90

ಅಲ್ಲಮಪ್ರಭುವಿನ ವಚನಗಳು : 81 ರಿಂದ 90 ೮೧. ಮಜ್ಜನಕ್ಕೆಱೆವರೆಲ್ಲಾ ಇದ್ದಲ್ಲಿ ಫಲವೇನು ? ಮುದ್ರೆಧಾರಿಗಳಪ್ಪರಯ್ಯ ! ಲಿಂಗದಲ್ಲಿ ನಿಷ್ಠೆಯಿಲ್ಲ ಜಂಗಮದಲ್ಲಿ ಪ್ರೇಮಿಗಳಲ್ಲ ವೇಷಲಾಂಛನಧಾರಿಗಳಪ್ಪರಯ್ಯ ! ನೋಡಿ ಮಾಡುವ ಭಕ್ತಿ ಸಜ್ಜನಸಾರಾಯವಲ್ಲ ಗುಹೇಶ್ವರ ಮೆಚ್ಚನಯ್ಯ ! ೮೨. ಕೊಟ್ಟ ಕುದುರೆಯನೇಱಲಱಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ ! ಧೀರರೂ ಅಲ್ಲ !! ಇದು ಕಾರಣ ನೆಱೆ ಮೂಱು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತಬಲ್ಲರೋ ? ೮೩. ಜೀವವಿಲ್ಲದ ಹೆಣನ ಹಿಡಿದಾರುವರಯ್ಯ ಪ್ರತಿಯಿಲ್ಲದ ಪ್ರತಿಗೆ ಪ್ರತಿಯ ಮಾಡುವರಯ್ಯ ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರು ಗುಹೇಶ್ವರ ! ೮೪. ಆದ್ಯರಲ್ಲ ! ವೇದ್ಯರಲ್ಲ ! ಸಾಧ್ಯರಲ್ಲದ ಹಿರಿಯರ ನೋಡಾ ! ತನುವಿಕಾರ ! ಮನವಿಕಾರ ! ಇಂದ್ರಿಯವಿಕಾರದ ಹಿರಿಯರ ನೋಡಾ ! ಶಿವಚಿಂತೆ ಶಿವಜ್ಞಾನಿಗಳ ಕಂಡರೆ ಅಳವಾಡಿ ನುಡಿವರು ಗುಹೇಶ್ವರನಱಿಯದ ಕರ್ಮಿಗಳಯ್ಯ ! ೮೫. ಆಳವಱಿಯದ ಭಾಷೆ ಬಹುಕುಳವಾದ ನುಡಿ ಇಂತೆರಡಱ ನುಡಿ ಹುಸಿಯಯ್ಯ ! ಬಹುಭಾಷಿತರು, ಸುಭಾಷಿತವರ್ಜಿತರು "ಶರಣಸತಿ ಲಿಂಗಪತಿ" ಎಂಬರು ಹುಸಿಯಯ್ಯ ! ಇಂತಪ್ಪವರ ಕಂಡು ನಾಚಿದೆನಯ್ಯ ಗುಹೇಶ್ವರ. ೮೬. ದೇಶ ಗುಱಿಯಾಗಿ ಲಯವಾಗಿ ಹೋದವರ ಕಂಡೆ ! ತಮಂಧ ಗುಱಿಯಾಗಿ ಲಯವಾಗಿ ಹೋದವರ ಕಂಡೆ ! ಕಾಮ ಗುಱಿಯಾಗಿ ಬೆಂದುಹೋದವರ ಕಂಡೆ ! ನೀ

ಅತ್ತಿತ್ತ ನೋಡದಿರು by MD Pallavi

ದೀಪು ನಿನ್ನದೇ