೧೩೧.
ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ,
ವಾಯುವಿನ ಚಲನೆ, ತರುಗುಲ್ಮಲತಾದಿಗಳಲ್ಲಿಯ ತಳಿರು ಪುಷ್ಪ
ಷಡುವರ್ಣಂಗಳೆಲ್ಲ ಹಗಲಿನ [ಪೂಜೆ]
ಚಂದ್ರಪ್ರಕಾಶ, ನಕ್ಷತ್ರ, ಅಗ್ನಿ,
ವಿದ್ಯುದ್ ಆದಿಗಳು ದೀಪ್ತಿಮಯವೆನಿಸಿಪ್ಪುವುಗಳೆಲ್ಲ
ಇರುಳಿನ ಪೂಜೆ;
ಹಗಲಿರುಳು ನಿನ್ನ ಪೂಜೆಯಲ್ಲಿ ಎನ್ನ ಮರೆದಿಪ್ಪೆನಯ್ಯ
ಚೆನ್ನಮಲ್ಲಿಕಾರ್ಜುನ
೧೩೨.
ಸಂಸಾರವ ನಿರ್ವಾಣವ ಮಾಡಿ,
ಮನವ ವಜ್ರತುರಗವ ಮಾಡಿ,
ಜೀವನ ರಾವುತನ ಮಾಡಿ,
ಮೇಲಕ್ಕುಪ್ಪುವಡಿಸಲೀಯದೆ,
ಮುಂದಕ್ಕೆ ಮುಗ್ಗರಿಸಲೀಯದೆ, ಈ ವಾರುವನ ದಳದ ಮೇಲೆ
ಅಟ್ಟಿ ಮುಟ್ಟಿ ಹಾರಿ ಬರಸೆಳೆದು ನಿಲಿಸಲರಿಯದೆ
ಪವನಬಣ್ಣದ ಕೇಸರಿಯ ತೊತ್ತಳದುಳಿವುತ್ತಿಪ್ಪುದಿದಾರಯ್ಯ?
ಅಂಗಡಿಯ ರಾಜಬೀದಿಯೋಳಗೆ ರತ್ನಶೆಟ್ಟಿಯ ಮಾಣಿಕ್ಯ ಬಿದ್ದರೆ
ಥಳಥಳನೆ ಹೊಳೆವ ಪ್ರಜ್ವಳಿತವ ಕಾಣದೆ
ಹಳಹಳನೆ ಹಳಚುತ್ತಿಪ್ಪುದಿದಾರಯ್ಯ?
ಹೃದಯಸ್ಥಾನದ ಧೂಪಗುಂಡಿಗೆಯಲ್ಲಿ
ಆಧಾರಸ್ಥಾನದಿಂಗಳ ಮತ್ತೊಂದು ಬಂದು,
ಪರಿಣಾಮವೆಂಬ ಧೂಪವನಿಕ್ಕಿ
ವಾಯುವಿನ ಸಂಬಂಧವರಿಯದೆ ವಾಯುವ ಮೇಲಕ್ಕೆತ್ತಲು
ಗಗನಕ್ಕೆ ತಾಗುವುದು,
ತಾಗಲಿಕೆ ಅಲ್ಲಿರ್ದ ಅಮೃತದ ಕೊಡನೊಡೆದು
ಕೆಳಗಣ ಹೃದಯಸ್ಥಾನದ ಮೇಲೆ ಬೀಳೆ,
ಮರೆಸಿದ ಮಾಣಿಕ್ಯವ ಕಾಣಬಹುದು,
ಇದನಾರು ಬಲ್ಲರೆಂದರೆ
ಹಮ್ಮಳಿದು ಇಹಪರವನರಿದು
ಪಂಚೇಂದ್ರಿಯದ ಇಂಗಿತವನರಿದ ಶರಣ ಬಸವಣ್ಣನಲ್ಲದೆ
ಈ ಪ್ರಾಣಘಾತವ ಮಾಡುವರೆತ್ತ ಬಲ್ಲರಯ್ಯ, ಚೆನ್ನಮಲ್ಲಿಕಾರ್ಜುನ
೧೩೩.
ಲಿಂಗಕ್ಕೆ ಶರಣೆಂದು ಪೂಜಿಸಬಹುದಲ್ಲದೆ
ಜಂಗಮವ ಪೂಜಿಸಿ ಸರ್ವಸುಖವನರ್ಪಿಸಿ ಶರಣೆನ್ನಬಾರದು ಎಲೆ ತಂದೆ
ಆಡಬಹುದು ಪಾಡಬಹುದಲ್ಲದೆ ನುಡಿದಂತೆ ನಡೆಯಲು ಬಾರದೆಲೆ ತಂದೆ
ಚೆನ್ನಮಲ್ಲಿಕಾರ್ಜುನದೇವ,
ನಿಮ್ಮ ಶರಣರು ನುಡಿದಂತೆ ನಡೆಯಲು ಬಲ್ಲರು ಎಲೆ ತಂದೆ
೧೩೪.
ಹಂದಿಯು ಮದಕರಿಯು ಒಂದೆ ದಾರಿಯಲ್ಲಿ
ಸಂಧಿಸಿದರೆ ಹಂದಿಗಂಜಿ ಮದಕರಿ ಕೆಲಸಕ್ಕೆ ಸಾರಿದರೆ,
ಹೀಹಂದಿಯದು ಕೇಸರಿಯಪ್ಪುದೇ
ಚೆನ್ನಮಲ್ಲಿಕಾರ್ಜುನ?
೧೩೫.
ಕಳನೇರಿ ಇಳಿವುದು ವೀರಂಗೆ ಮತವಲ್ಲ
ಶಿವಶರಣಂಗೆ ಹಿಮ್ಮೆಟ್ಟುವುದು ಪಥವಲ್ಲ
ಮನದೊಡೆಯ ಮನವನಿಂಬುಗೊಂಬನಯ್ಯ
ಏರಲಾಗದು ಶ್ರೀಪರ್ವತವ, ಏರಿ ಇಳಿದೊಡೆ ವ್ರತಕ್ಕೆ ಭಂಗ
ಕಳನೇರಿ ಕೈಮರೆದಡೆ ಮಾರಂಕ
ಚೆನ್ನಮಲ್ಲಿಕಾರ್ಜುನನಿಮ್ಮೈಗಾಣಲಿರಿವನು
೧೩೬.
ಬಯಲು ಲಿಂಗವೆಂಬೆನೆ ? ನಡೆದಲ್ಲಿಯೇ ಹೋಯಿತು
ಬೆಟ್ಟ ಲಿಂಗವೆಂಬೆನೆ ? ಮೆಟ್ಟಿನಡೆದಲ್ಲಿಯೇ ಹೋಯಿತು
ತರುಮರಾದಿಗಳು ಲಿಂಗವೆಂಬೆನೆ ? ತರಿದಲ್ಲಿಯೇ ಹೋಯಿತು
ಲಿಂಗಜಂಗಮದ ಪಾದವೇ ಗತಿಯೆಂದು ನಂಬಿದ
ಸಂಗನ ಬಸವಣ್ಣನ ಮಾತ ಕೇಳದೆ
ಕೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನ
೧೩೭.
ಅರಿವು ಸಾಧ್ಯವಾಯಿತ್ತೆಂದು
ಗುರು-ಲಿಂಗ-ಜಂಗಮವ ಬಿಡಬಹುದೇ?
ಸಂದುಸಂಶಯವಳಿದಖಂಡಜ್ಞಾನವಾಯಿತ್ತೆಂದು
ಪರಧನ-ಪರಸ್ತ್ರೀಗಳುಪಬಹುದೇ?
ಯತ್ರ ಜೀವಸ್ತತ್ರ ಶಿವಃ ಎಂಬ ಅಭಿನ್ನಜ್ಞಾನವಾಯಿತ್ತೆಂದು
ಶುನಕು-ಸೂಕರ-ಕುಕ್ಕುಟ-ಮಾರ್ಜಾಲಂಗಳ ಕೂಡಿ ಭುಂಜಿಸಬಹುದೇ?
ಭಾವದಲ್ಲಿ ತನ್ನ ನಿಜ ನೆಲೆಯರಿಯನರಿವುತ್ತಿಹುದು
ಸುಜ್ಞಾನ-ಸತ್ಕ್ರಿಯಾ-ಸುನೀತಿ-ಸುಮಾರ್ಗದಲ್ಲಿ ವರ್ತಿಸುವುದು
ಹೀಂಗಲ್ಲದೆ ಜ್ಞಾನವಾಯಿತ್ತೆಂದು
ತನ್ನ ಮನಕ್ಕೆ ಬಂದ ಹಾಂಗೆ ಮೀರಿ ನುಡಿದು ನಡೆದೊಡೆ
ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯನು?
೧೩೮.
ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ
ಆಪ್ಯಾಯನ ಬಿಡದು
ಕಾಯವರ್ಪಿತವೆಂಬ ಹುಸಿಯ ನೋಡಾ
ನಾನು ಭಕ್ತನೆಂಬ ನಾಚಿಕೆಯ ನೋಡಾ
ನಾನು ಯುಕ್ತನೆಂಬ ಹೇಸಿಕೆಯ ನೋಡಾ
ಓಗರವಿನ್ನಾಗದು ಪ್ರಸಾದ ಮುನ್ನಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ, ಉಭಯವಡಗದನ್ನಕ
೧೩೯.
ಅಕ್ಕಿಯಿಲ್ಲದ ತುಷಕ್ಕೆ ಅಗ್ಘವಣಿಯನೆರೆದರೆ
ಅದೆಂದಿಗೆ ಬೆಳೆದು ಫಲವಪ್ಪುದಯ್ಯ?
ಅರಿವಿಲ್ಲದವರಿಗೆ ಆಚಾರವಿದ್ದರೆ
ಅರಕೆಗೆಟ್ಟು ಸುಖವೆಂದಪ್ಪುದಯ್ಯ?
ಹಾರದ ಪರಿಮಳವು ಸ್ಥಿರವಾಗಬಲ್ಲುದೇ?
ಎನ್ನ ದೇವ ಚೆನ್ನಮಲ್ಲಿಕಾರ್ಜುನನರಿಯದವರಿಗೆ
ಆಚಾರವಿಲ್ಲ ಕಾಣಿರಯ್ಯ
೧೪೦.
ಸಟೆ-ದಿಟವೆಂಬುವೆರಡುವಿಡಿದು
ನಡೆವುದೀ ಲೋಕವೆಲ್ಲವು
ಸಟೆ-ದಿಟವೆಂಬುವೆರಡುವಿಡಿದು
ನಡೆವನೇ ಲೋಕದೊಡನೆ ಶರಣನು?
ಗುರು-ಲಿಂಗ-ಜಂಗಮದಲ್ಲಿ ಸಟೆಯ ಬಳಸಿದಡೆ
ಆತನು ತ್ರಿವಿಧಕ್ಕೆ ದ್ರೋಹಿ, ಅಘೋರನರಕಿ,
ಉಂಬುದೆಲ್ಲ ಕಿಲ್ಪಿಷ, ತಿಂಬುದೆಲ್ಲ ಅಡಗು, ಕುಡಿವುದೆಲ್ಲ ಸುರೆ
ಹುಸಿಯೆಂಬುದೇ ಹೊಲೆ
ಶಿವಭಕ್ತಂಗೆ ಹುಸಿಯೆಂಬುದುಂಟೆ ಅಯ್ಯ?
ಹುಸಿಯನಾಡಿ ಲಿಂಗವ ಪೂಜಿಸಿದಡೆ
ಹೊಳ್ಳ ಬಿತ್ತಿ ಫಲವನರಸುವಂತೆ ಕಾಣಾ ಚೆನ್ನಮಲ್ಲಿಕಾರ್ಜುನ
ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ,
ವಾಯುವಿನ ಚಲನೆ, ತರುಗುಲ್ಮಲತಾದಿಗಳಲ್ಲಿಯ ತಳಿರು ಪುಷ್ಪ
ಷಡುವರ್ಣಂಗಳೆಲ್ಲ ಹಗಲಿನ [ಪೂಜೆ]
ಚಂದ್ರಪ್ರಕಾಶ, ನಕ್ಷತ್ರ, ಅಗ್ನಿ,
ವಿದ್ಯುದ್ ಆದಿಗಳು ದೀಪ್ತಿಮಯವೆನಿಸಿಪ್ಪುವುಗಳೆಲ್ಲ
ಇರುಳಿನ ಪೂಜೆ;
ಹಗಲಿರುಳು ನಿನ್ನ ಪೂಜೆಯಲ್ಲಿ ಎನ್ನ ಮರೆದಿಪ್ಪೆನಯ್ಯ
ಚೆನ್ನಮಲ್ಲಿಕಾರ್ಜುನ
೧೩೨.
ಸಂಸಾರವ ನಿರ್ವಾಣವ ಮಾಡಿ,
ಮನವ ವಜ್ರತುರಗವ ಮಾಡಿ,
ಜೀವನ ರಾವುತನ ಮಾಡಿ,
ಮೇಲಕ್ಕುಪ್ಪುವಡಿಸಲೀಯದೆ,
ಮುಂದಕ್ಕೆ ಮುಗ್ಗರಿಸಲೀಯದೆ, ಈ ವಾರುವನ ದಳದ ಮೇಲೆ
ಅಟ್ಟಿ ಮುಟ್ಟಿ ಹಾರಿ ಬರಸೆಳೆದು ನಿಲಿಸಲರಿಯದೆ
ಪವನಬಣ್ಣದ ಕೇಸರಿಯ ತೊತ್ತಳದುಳಿವುತ್ತಿಪ್ಪುದಿದಾರಯ್ಯ?
ಅಂಗಡಿಯ ರಾಜಬೀದಿಯೋಳಗೆ ರತ್ನಶೆಟ್ಟಿಯ ಮಾಣಿಕ್ಯ ಬಿದ್ದರೆ
ಥಳಥಳನೆ ಹೊಳೆವ ಪ್ರಜ್ವಳಿತವ ಕಾಣದೆ
ಹಳಹಳನೆ ಹಳಚುತ್ತಿಪ್ಪುದಿದಾರಯ್ಯ?
ಹೃದಯಸ್ಥಾನದ ಧೂಪಗುಂಡಿಗೆಯಲ್ಲಿ
ಆಧಾರಸ್ಥಾನದಿಂಗಳ ಮತ್ತೊಂದು ಬಂದು,
ಪರಿಣಾಮವೆಂಬ ಧೂಪವನಿಕ್ಕಿ
ವಾಯುವಿನ ಸಂಬಂಧವರಿಯದೆ ವಾಯುವ ಮೇಲಕ್ಕೆತ್ತಲು
ಗಗನಕ್ಕೆ ತಾಗುವುದು,
ತಾಗಲಿಕೆ ಅಲ್ಲಿರ್ದ ಅಮೃತದ ಕೊಡನೊಡೆದು
ಕೆಳಗಣ ಹೃದಯಸ್ಥಾನದ ಮೇಲೆ ಬೀಳೆ,
ಮರೆಸಿದ ಮಾಣಿಕ್ಯವ ಕಾಣಬಹುದು,
ಇದನಾರು ಬಲ್ಲರೆಂದರೆ
ಹಮ್ಮಳಿದು ಇಹಪರವನರಿದು
ಪಂಚೇಂದ್ರಿಯದ ಇಂಗಿತವನರಿದ ಶರಣ ಬಸವಣ್ಣನಲ್ಲದೆ
ಈ ಪ್ರಾಣಘಾತವ ಮಾಡುವರೆತ್ತ ಬಲ್ಲರಯ್ಯ, ಚೆನ್ನಮಲ್ಲಿಕಾರ್ಜುನ
೧೩೩.
ಲಿಂಗಕ್ಕೆ ಶರಣೆಂದು ಪೂಜಿಸಬಹುದಲ್ಲದೆ
ಜಂಗಮವ ಪೂಜಿಸಿ ಸರ್ವಸುಖವನರ್ಪಿಸಿ ಶರಣೆನ್ನಬಾರದು ಎಲೆ ತಂದೆ
ಆಡಬಹುದು ಪಾಡಬಹುದಲ್ಲದೆ ನುಡಿದಂತೆ ನಡೆಯಲು ಬಾರದೆಲೆ ತಂದೆ
ಚೆನ್ನಮಲ್ಲಿಕಾರ್ಜುನದೇವ,
ನಿಮ್ಮ ಶರಣರು ನುಡಿದಂತೆ ನಡೆಯಲು ಬಲ್ಲರು ಎಲೆ ತಂದೆ
೧೩೪.
ಹಂದಿಯು ಮದಕರಿಯು ಒಂದೆ ದಾರಿಯಲ್ಲಿ
ಸಂಧಿಸಿದರೆ ಹಂದಿಗಂಜಿ ಮದಕರಿ ಕೆಲಸಕ್ಕೆ ಸಾರಿದರೆ,
ಹೀಹಂದಿಯದು ಕೇಸರಿಯಪ್ಪುದೇ
ಚೆನ್ನಮಲ್ಲಿಕಾರ್ಜುನ?
೧೩೫.
ಕಳನೇರಿ ಇಳಿವುದು ವೀರಂಗೆ ಮತವಲ್ಲ
ಶಿವಶರಣಂಗೆ ಹಿಮ್ಮೆಟ್ಟುವುದು ಪಥವಲ್ಲ
ಮನದೊಡೆಯ ಮನವನಿಂಬುಗೊಂಬನಯ್ಯ
ಏರಲಾಗದು ಶ್ರೀಪರ್ವತವ, ಏರಿ ಇಳಿದೊಡೆ ವ್ರತಕ್ಕೆ ಭಂಗ
ಕಳನೇರಿ ಕೈಮರೆದಡೆ ಮಾರಂಕ
ಚೆನ್ನಮಲ್ಲಿಕಾರ್ಜುನನಿಮ್ಮೈಗಾಣಲಿರಿವನು
೧೩೬.
ಬಯಲು ಲಿಂಗವೆಂಬೆನೆ ? ನಡೆದಲ್ಲಿಯೇ ಹೋಯಿತು
ಬೆಟ್ಟ ಲಿಂಗವೆಂಬೆನೆ ? ಮೆಟ್ಟಿನಡೆದಲ್ಲಿಯೇ ಹೋಯಿತು
ತರುಮರಾದಿಗಳು ಲಿಂಗವೆಂಬೆನೆ ? ತರಿದಲ್ಲಿಯೇ ಹೋಯಿತು
ಲಿಂಗಜಂಗಮದ ಪಾದವೇ ಗತಿಯೆಂದು ನಂಬಿದ
ಸಂಗನ ಬಸವಣ್ಣನ ಮಾತ ಕೇಳದೆ
ಕೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನ
೧೩೭.
ಅರಿವು ಸಾಧ್ಯವಾಯಿತ್ತೆಂದು
ಗುರು-ಲಿಂಗ-ಜಂಗಮವ ಬಿಡಬಹುದೇ?
ಸಂದುಸಂಶಯವಳಿದಖಂಡಜ್ಞಾನವಾಯಿತ್ತೆಂದು
ಪರಧನ-ಪರಸ್ತ್ರೀಗಳುಪಬಹುದೇ?
ಯತ್ರ ಜೀವಸ್ತತ್ರ ಶಿವಃ ಎಂಬ ಅಭಿನ್ನಜ್ಞಾನವಾಯಿತ್ತೆಂದು
ಶುನಕು-ಸೂಕರ-ಕುಕ್ಕುಟ-ಮಾರ್ಜಾಲಂಗಳ ಕೂಡಿ ಭುಂಜಿಸಬಹುದೇ?
ಭಾವದಲ್ಲಿ ತನ್ನ ನಿಜ ನೆಲೆಯರಿಯನರಿವುತ್ತಿಹುದು
ಸುಜ್ಞಾನ-ಸತ್ಕ್ರಿಯಾ-ಸುನೀತಿ-ಸುಮಾರ್ಗದಲ್ಲಿ ವರ್ತಿಸುವುದು
ಹೀಂಗಲ್ಲದೆ ಜ್ಞಾನವಾಯಿತ್ತೆಂದು
ತನ್ನ ಮನಕ್ಕೆ ಬಂದ ಹಾಂಗೆ ಮೀರಿ ನುಡಿದು ನಡೆದೊಡೆ
ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯನು?
೧೩೮.
ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ
ಆಪ್ಯಾಯನ ಬಿಡದು
ಕಾಯವರ್ಪಿತವೆಂಬ ಹುಸಿಯ ನೋಡಾ
ನಾನು ಭಕ್ತನೆಂಬ ನಾಚಿಕೆಯ ನೋಡಾ
ನಾನು ಯುಕ್ತನೆಂಬ ಹೇಸಿಕೆಯ ನೋಡಾ
ಓಗರವಿನ್ನಾಗದು ಪ್ರಸಾದ ಮುನ್ನಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ, ಉಭಯವಡಗದನ್ನಕ
೧೩೯.
ಅಕ್ಕಿಯಿಲ್ಲದ ತುಷಕ್ಕೆ ಅಗ್ಘವಣಿಯನೆರೆದರೆ
ಅದೆಂದಿಗೆ ಬೆಳೆದು ಫಲವಪ್ಪುದಯ್ಯ?
ಅರಿವಿಲ್ಲದವರಿಗೆ ಆಚಾರವಿದ್ದರೆ
ಅರಕೆಗೆಟ್ಟು ಸುಖವೆಂದಪ್ಪುದಯ್ಯ?
ಹಾರದ ಪರಿಮಳವು ಸ್ಥಿರವಾಗಬಲ್ಲುದೇ?
ಎನ್ನ ದೇವ ಚೆನ್ನಮಲ್ಲಿಕಾರ್ಜುನನರಿಯದವರಿಗೆ
ಆಚಾರವಿಲ್ಲ ಕಾಣಿರಯ್ಯ
೧೪೦.
ಸಟೆ-ದಿಟವೆಂಬುವೆರಡುವಿಡಿದು
ನಡೆವುದೀ ಲೋಕವೆಲ್ಲವು
ಸಟೆ-ದಿಟವೆಂಬುವೆರಡುವಿಡಿದು
ನಡೆವನೇ ಲೋಕದೊಡನೆ ಶರಣನು?
ಗುರು-ಲಿಂಗ-ಜಂಗಮದಲ್ಲಿ ಸಟೆಯ ಬಳಸಿದಡೆ
ಆತನು ತ್ರಿವಿಧಕ್ಕೆ ದ್ರೋಹಿ, ಅಘೋರನರಕಿ,
ಉಂಬುದೆಲ್ಲ ಕಿಲ್ಪಿಷ, ತಿಂಬುದೆಲ್ಲ ಅಡಗು, ಕುಡಿವುದೆಲ್ಲ ಸುರೆ
ಹುಸಿಯೆಂಬುದೇ ಹೊಲೆ
ಶಿವಭಕ್ತಂಗೆ ಹುಸಿಯೆಂಬುದುಂಟೆ ಅಯ್ಯ?
ಹುಸಿಯನಾಡಿ ಲಿಂಗವ ಪೂಜಿಸಿದಡೆ
ಹೊಳ್ಳ ಬಿತ್ತಿ ಫಲವನರಸುವಂತೆ ಕಾಣಾ ಚೆನ್ನಮಲ್ಲಿಕಾರ್ಜುನ
Comments
Post a Comment